ಜಾಗೃತ ಕರ್ನಾಟಕದ ಮೂಲಭೂತ ಪರಿಕಲ್ಪನೆ
ರಾಜಕೀಯದ ನಿರ್ಣಾಯಕ ಪಾತ್ರ
ರಾಜಕಾರಣವು ಜನರ ಬದುಕಿನ ಪ್ರತಿಯೊಂದು ಆಯಾಮವನ್ನೂ ನಿರ್ಧರಿಸುತ್ತದೆ. ಸಮಗ್ರ ಅಭಿವೃದ್ಧಿ ಹಾಗೂ ನೆಮ್ಮದಿಯುತ ಸಮಾಜ ನಿರ್ಮಾಣದಲ್ಲಿ ರಾಜಕಾರಣದ ಪಾತ್ರ ಅತ್ಯಂತ ನಿರ್ಣಾಯಕವಾದುದು. ಜಾಗೃತ ಕರ್ನಾಟಕವು ಒಂದು ರಾಜಕೀಯ ಸಂಘಟನೆಯಾಗಿ ಕೆಲಸ ಮಾಡುತ್ತದೆ.
ಚುನಾವಣಾ ರಾಜಕೀಯದ ಪ್ರಾಮುಖ್ಯತೆ
ಪ್ರಜಾಪ್ರಭುತ್ವದಲ್ಲಿ ಚುನಾವಣಾ ರಾಜಕಾರಣವು ಅತ್ಯಂತ ಮುಖ್ಯ. ಅದಕ್ಕಾಗಿ ನಮ್ಮದೇ ಆದ ರಾಜಕೀಯ ಪಕ್ಷವನ್ನು ಹುಟ್ಟು ಹಾಕುವುದೂ ಸೇರಿದಂತೆ ಹಲ ಬಗೆಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತೇವೆ.
ರಾಜಕೀಯ ಆಂದೋಲನ ಮಾದರಿಗಳ ಅನ್ವೇಷಣೆ
ಇಂದಿನ ಸಂದರ್ಭದಲ್ಲೂ ಪ್ರಸ್ತುತವಾಗಿರುವ ರಾಜಕೀಯ ಆಂದೋಲನ ಕಟ್ಟಲು ಹಾಗೂ ಚುನಾವಣಾ ರಾಜಕಾರಣದಲ್ಲಿ ಅಂಚಿನಲ್ಲಿರದೇ, ಬಲಶಾಲಿಯಾಗುವ ರೀತಿಯ ಶಕ್ತಿಯಾಗಲು ನಾವು ಕಾರ್ಯಪ್ರವೃತ್ತರಾಗುತ್ತೇವೆ.
ಸಂವಿಧಾನದ ಮುನ್ನುಡಿಯೇ ಧ್ಯೇಯ
ಭಾರತದ ಸ್ವಾತಂತ್ರ್ಯ ಸಂಗ್ರಾಮವು ಕಂಡ ಹೊಸ ಸಮಾಜದ ಈಡೇರದ ಕನಸನ್ನು ನನಸು ಮಾಡುವುದು ನಮ್ಮ ಧ್ಯೇಯ. ಸಂವಿಧಾನದ ಮುನ್ನುಡಿಯು, ಆ ಧ್ಯೇಯದ ಸಮರ್ಪಕ ಅಭಿವ್ಯಕ್ತಿಯಾಗಿದೆ
ನ್ಯಾಯ ಮತ್ತು ಭ್ರಾತೃತ್ವವನ್ನು ಬೆಳೆಸುವುದು
ಸಾಮಾಜಿಕ ರಾಜಕೀಯ ಮತ್ತು ಆರ್ಥಿಕ ನ್ಯಾಯ ಹಾಗೂ ಸೋದರತೆಯನ್ನು ನೆಲೆಗೊಳಿಸಲು ಪ್ರಯತ್ನಿಸುವುದು ನಮ್ಮ ಪ್ರಧಾನ ಆಶಯ ಮತ್ತು ಚಟುವಟಿಕೆಗಳಾಗಿರುತ್ತದೆ. ವಿವಿಧ ಜಾತಿ, ಧರ್ಮ, ಜನಾಂಗಗಳು, ವಿವಿಧ ಸ್ತರಗಳ ವರ್ಗಗಳು ಇರುವ ಈ ಸಂಕೀರ್ಣ ದೇಶದಲ್ಲಿ ಇದು ಸುಲಭವಲ್ಲ; ಆದರೆ, ಅಸಾಧ್ಯವಲ್ಲ. ಸ್ವಾತಂತ್ರ್ಯ, ಸಮಾನತೆಗಳ ಆಶಯಗಳು ಸಮಾಜದಲ್ಲಿ ನೆಲೆಗೊಳ್ಳದಿದ್ದರೆ, ಸರ್ಕಾರದಲ್ಲೂ ಇರದಂತೆ ನೋಡಿಕೊಳ್ಳಲಾಗುತ್ತದೆ. ಹಾಗಾಗಿ ಏಕಕಾಲದಲ್ಲಿ ಎರಡೂ ಕಡೆ ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇದುವರೆಗಿನ ಪ್ರಯತ್ನಗಳ ಸಾಧನೆ ಮತ್ತು ಮಿತಿ ಎರಡನ್ನೂ ಅರಿತು ಸಮಗ್ರ ಸಮಕಾಲೀನ ದಾರಿಯೊಂದನ್ನು ಕಂಡುಕೊಳ್ಳುವ ಅಗತ್ಯವಿದೆ.
ಅಭಿವೃದ್ಧಿಯ ಹೊಸ ಮಾದರಿಗಳ ಹುಡುಕಾಟ
ಶಾಂತಿ, ಸೃಜನಶೀಲತೆ ಹಾಗೂ ಸಮತೆ ನಿರಂತರವಾಗಿ ಹೆಚ್ಚಾಗುತ್ತಲೇ ಹೋಗುವ ಸಮಾಜ ನಿರ್ಮಾಣವೇ ಅಭಿವೃದ್ಧಿ. ಆ ಅಭಿವೃದ್ಧಿಯತ್ತ ಪ್ರಪಂಚದ ಪಯಣ ಇರುವಂತಾಗಲು, ಭಾರತ ಮತ್ತು ಕರ್ನಾಟಕವು ಮಹತ್ವದ ಪಾತ್ರ ವಹಿಸುವಂತಾಗಬೇಕು. ಅದಕ್ಕಾಗಿ ಜಾಗೃತ ಕರ್ನಾಟಕವು ನಿರಂತರವಾಗಿ ಕೆಲಸ ಮಾಡುತ್ತದೆ.
ಸ್ವಾತಂತ್ರ್ಯ ಸಂಗ್ರಾಮದ ಅಪೂರ್ಣ ಆಶಯದ ಈಡೇರಿಕೆ
ಭಾರತವೆಂಬ ಈ ದೇಶ ಹಾಗೂ ಕರ್ನಾಟಕದ ಹುಟ್ಟಿಗೆ ಕಾರಣವಾದದ್ದು ಸ್ವಾತಂತ್ರ್ಯ ಸಂಗ್ರಾಮವೆಂಬ ಒಂದು ರೋಮಾಂಚಕಾರಿ ಮತ್ತು ವೀರೋಚಿತ ವಿದ್ಯಮಾನ. ಅದು ಏಕಕಾಲದಲ್ಲಿ ಬ್ರಿಟಿಷರನ್ನು ಹೊರದೂಡುವ ಮತ್ತು ಭಾರತದೊಳಗಿನ ವಿವಿಧ ಬಗೆಯ ಅಸಮಾನತೆಗಳ ವಿರುದ್ಧ ಹೋರಾಡುವ ಎರಡು ಆಯಾಮಗಳನ್ನು ಹೊಂದಿತ್ತು. ಆರೆಸ್ಸೆಸ್ ಈ ಎರಡೂ ಆಯಾಮಗಳ ವಿರುದ್ಧವಿತ್ತು. ಅಂದರೆ, ಈ ದೇಶದ ಹುಟ್ಟಿಗೆ ಕಾರಣವಾದ ಆಂದೋಲನದ ವಿರುದ್ಧವಿತ್ತು. ಹಾಗಾಗಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಕೇವಲ ಸೋಲಿಸುವುದಲ್ಲ, ಜೀವವಿರೋಧಿಯಾದ ಈ ತಾತ್ವಿಕತೆಯನ್ನು ಭಾರತದ ಸಮಾಜದ ಮುಖ್ಯವಾಹಿನಿಯಿಂದಲೇ ಮೂಲೋತ್ಪಾಟನೆ ಮಾಡುವ ಅಗತ್ಯವಿದೆ. ಸ್ವಾತಂತ್ರ್ಯ ಸಂಗ್ರಾಮದ ಅಪೂರ್ಣ ಆಶಯವನ್ನು ಈಡೇರಿಸಲು ಇದು ಅನಿವಾರ್ಯ ಎಂಬುದು ನಮಗೆ ಸ್ಪಷ್ಟವಿದೆ.
ಹೊಸ ಮೈತ್ರಿಗಳನ್ನು ರೂಪಿಸುವುದು
ಕಾಂಗ್ರೆಸ್ ಒಳಗೊಂಡಂತೆ ವಿವಿಧ ಬಿಜೆಪಿಯೇತರ ರಾಜಕೀಯ ಪಕ್ಷಗಳು ಈಗಿರುವ ಸ್ಥಿತಿಯಲ್ಲಿ ನಮಗೆ ಆದರ್ಶವಲ್ಲ; ಆದರೆ, ಮೇಲೆ ಹಾಕಿಕೊಳ್ಳಲಾದ ಮಹತ್ವಾಕಾಂಕ್ಷಿ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೊಸ ರಾಜಕೀಯ ಹಾಗೂ ಸಾಮಾಜಿಕ ಮೈತ್ರಿಗಳ ಅಗತ್ಯವಿದೆ. ಆ ವಿಚಾರದಲ್ಲಿ ನಾವು ಮುಕ್ತ ಮನಸ್ಸು ಹೊಂದಿರುತ್ತೇವೆ.
ಸಾಂಸ್ಥಿಕ ಸ್ವರೂಪ
ತಾತ್ವಿಕ ಬದ್ಧತೆಯಿಂದ ಇದಕ್ಕಾಗಿ ಸಮಯ ಕೊಟ್ಟು ಕೆಲಸ ಮಾಡುವ ಸದಸ್ಯರ ಪಡೆ ಮತ್ತು ವಿಶಾಲ ಬೆಂಬಲಿಗರ ಬಳಗ ಇದು ನಮ್ಮ ಸದ್ಯದ ಸಂಘಟನಾ ಸ್ವರೂಪವಾಗಿರುತ್ತದೆ.
ಜಾಗೃತ ಕರ್ನಾಟಕ
ರಾಜಕೀಯ ಜಾಗೃತಿಯೊಂದನ್ನು ಕರ್ನಾಟಕದಿಂದ ಆರಂಭಿಸುದಕ್ಕಾಗಿ ಇದೊಂದು ರಾಜಕೀಯ ಸಂಘಟನೆ
ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಬದಲಿಸಿದರೆ ರಾಜಕೀಯ ಬದಲಾಗುವುದಿಲ್ಲ
ಇಂದಿನ ರಾಜಕೀಯ ಬದಲಾಗದೆ ಇದ್ದರೆ ಭಾರತ ದೇಶ ಉಳಿಯುವುದಿಲ್ಲ
ರಾಜಕೀಯವನ್ನು ಸಂವಿಧಾನ ಸಾರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವ ಬಂಧುತ್ವದ ಆಶಯಗಳನುಸಾರ ರಾಜಕೀಯವನ್ನು ಮರುರೂಪಿಸಲು
ಕರ್ನಾಟಕದ ನೆಲದಲ್ಲೊಂದು ಚಿಂತನೆ ಮತ್ತು ಕಾರ್ಯಾಚರಣೆಯ ರಾಜಕೀಯ ಪ್ರಯೋಗ....
ರಾಜಕೀಯ ಸಂಘಟನೆಯಾಗಿ ಜಾಗೃತ ಕರ್ನಾಟಕದ ಘೋಷಣೆ
ತತ್ ಕ್ಷಣದ ಕಾರ್ಯಕ್ರಮಗಳು
ಚುನಾವಣಾ ರಾಜಕೀಯವನ್ನು ಹಣ, ಜಾತಿ ಮತ್ತು ಧರ್ಮದ್ವೇಷದ ಪ್ರಭಾವದಿಂದ ಬಿಡುಗಡೆಗೊಳಿಸಿ ಚುನಾವಣೆ ಗೆಲ್ಲುವ ಹೊಸ ಮಾರ್ಗಗಳ ಅನ್ವೇಷಣೆ; ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದಂತೆ ಸಾಮಾನ್ಯ ಜನರ ನಾಡಿಮಿಡಿತ ಅರ್ಥಮಾಡಿಕೊಳಬಲ್ಲ, ನಿಸ್ವಾರ್ಥ, ಸೇವಾ ಮನೋಭಾವದ ಸಮರ್ಥ ವ್ಯಕ್ತಿಗಳು ರಾಜಕೀಯ ಪ್ರವೇಶ ಮಾಡುವ ವಾತಾವರಣ ನಿರ್ಮಿಸುವುದು; ರಾಜಕೀಯವನ್ನು ಪರಿವರ್ತನೆಯ ಪ್ರಬಲ ಅಸ್ತ್ರವನ್ನಾಗಿ ಬಳಸುವುದು.
ಬಿಜೆಪಿ ಮತ್ತು ಆರ್.ಎಸ.ಎಸ. ಸೇರಿದಂತೆ ಮೂಲಭೂತವಾಗಿ ಸಂವಿಧಾನವನ್ನೇ ಒಪ್ಪದ ರಾಜಕೀಯ ಪಕ್ಷ ಮತ್ತು ಸಂಘಟನೆಗಳನ್ನು ಸಮಾಜದ ಮುಖ್ಯವಾಹಿನಿಯಿಂದ ಕಿತ್ತೊಗೆಯಲು ಜನಜಾಗೃತಿ ಮೂಡಿಸುವುದು. ಸಂವಿಧಾನದ ಚೌಕಟ್ಟಿನೊಳಗೆ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳಲ್ಲಿ ಪರಿವರ್ತನೆಗಾಗಿ ಪ್ರಯತ್ನ.
ಅಭಿವೃದ್ಧಿ ಸಾಧಿಸುವುದು ಎಂದರೆ ಏನು, ಅಭಿವೃದ್ಧಿಯ ಹೆಸರಲ್ಲಿ ಮಾಡಲೇ ಬೇಕಿರುವ ಮತ್ತು ಮಾಡಲೇ ಬಾರದ ವಿಚಾರಗಳ ಬಗ್ಗೆ ಜಿಜ್ಞಾಸೆ ನಡೆಸಿ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳನ್ನು ಮರುರೂಪಿಸುವುದು.
ಈ ಮೂರೂ ಆಯಾಮಗಳಲ್ಲಿ ಕೈಗೊಳ್ಳಲಿರುವ ನಿರ್ಧಿಷ್ಟ ಕಾರ್ಯಕ್ರಮಗಳನ್ನು ನಿರೀಕ್ಷಿಸಿ
ರಾಜಕೀಯ ಪಕ್ಷವಲ್ಲ – ಆದರೂ ಚುನಾವಣಾ ರಾಜಕೀಯವನ್ನು ಬದಲಿಸುವ ಗುರಿ
ರಾಜಕೀಯ ಒಳ್ಳೆಯವರಿಗಲ್ಲ ಎಂಬುದನ್ನು ಸುಳ್ಳಾಗಿಸುವ ಆಕಾಂಕ್ಷೆ
ರಾಜಕಾರಣ ಬದಲಾಗದೆ ದೇಶದಲ್ಲಿ ಏನೂ ಬದಲಿಸಲಾಗದು ಎನ್ನುವ ನಿಲುವು